ಮನೆಗೆ ಮುತ್ತಿಗೆ ಹಾಕಿದ್ದು ನಿಜವಾಗಲೂ ಎಬಿವಿಪಿ ಕಾರ್ಯಕರ್ತರೇ ಎಂಬ ಅನುಮಾನ | JANATA NEWS
ಶಿವಮೊಗ್ಗ : ಬೆಂಗಳೂರಿನ ತನ್ನ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಎಂದು ಹೇಳಿಕೊಂಡ ಕೆಲವರು ಪ್ರತಿಭಟನೆ ಮಾಡಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅವರು ನಿಜವಾಗಿಯೂ ಎಬಿವಿಬಿ ಕಾರ್ಯಕರ್ತರೇ..? ಎಂಬ ಅನುಮಾನ ಕಾಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಪಿಎಫ್ಐ, ಎಸ್ ಡಿಪಿಐ ಸೇರಿದಂತೆ ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ಹೋರಾಟ ಮಾಡಿದ್ದಾರೆ. ಅವರು ಎಬಿವಿಪಿ ಕಾರ್ಯಕರ್ತರೇ ಆಗಿದ್ದರೆ ನಾನು ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಸರ್ಕಾರ ನಿಮ್ಮ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತದೆ ಈವರೆಗೂ ಎಬಿವಿಪಿ ಕಾರ್ಯರ್ತರನ್ನು ಬಂಧಿಸಿಲ್ಲ. ಕೆಲವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.
ಯುಪಿಯಲ್ಲಿನ ಯೋಗಿ ಮಾದರಿಯೇ ಬೇರೆ ನಮ್ಮ ಪರಿಸ್ಥಿತಿಯೇ ಬೇರೆ. ಅನೇಕ ಕಾರ್ಯಕರ್ತರು ತಮ್ಮ ನೋವಿನಿಂದ ಈ ರೀತಿಯ ಮಾತು ಆಡುತ್ತಿದ್ದಾರೆ ಎಂದ ಅವರು ವಿಶೇಷವಾಗಿ ಕೇಸ್ ತೆಗೆದುಕೊಂಡು ಹೋಗುತ್ತೇವೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ಗೆ ಮನವಿ ಮಾಡ್ತಿದ್ದೇವೆ. ಬಿಸಿ ಇದ್ದಾಗಲೇ ಜಡ್ಜ್ಮೆಂಟ್ ಬಂದರೆ ಒಳ್ಳೆಯದಾಗುತ್ತದೆ. ಪ್ರವೀಣ್ ಪ್ರಕರಣವನ್ನು ಎನ್ಐಎಗೆ ವಹಿಸಿದ್ದೇವೆ ಎಂದರು.